“ಇಂಡಿಯಾ ಆಫ್ಟರ್ ಗಾಂಧಿ” ಯ ಲೇಖಕರಾದ ರಾಮಚಂದ್ರ ಗುಹಾರವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ 8 ಆಪತ್ತುಗಳ ಬಗ್ಗೆ ಮಾತನಾಡಿದರು.

ನಮಗೆ ಅಭಿವ್ಯಕ್ತಿ ಸ್ವಾತಂತ್ರದ ಬಗ್ಗೆ ಪ್ರಶ್ನಿಸುವ ಸ್ವಾತಂತ್ರವಾದರೂ ಇದೆಯೇ? ಭಾರತದಲ್ಲಿ ಪ್ರಜಾ ತಾಂತ್ರಿಕತೆ ಎಷ್ಟರ ಮಟ್ಟಿಗಿದೆ? ಕಳೆದ ದಶಕದ ಅವರ ಅಭಿಪ್ರಾಯದಂತೆ ಭಾರತದಲ್ಲಿ 50-50 ರಷ್ಟು ಪ್ರಜಾಪ್ರಭುತ್ವ ಇತ್ತು. ಪ್ರಜಾ ಪ್ರಭುತ್ವವನ್ನು ಪೋಷಿಸುವ ಮತ್ತು ಅದನ್ನು ದುರ್ಬಲಗೊಳಿಸುವ ಸಂಸ್ಥೆಗಳ ಸಮತೋಲನವಿತ್ತು. ಆದರೆ ಇಂದು 40-60 ರಷ್ಟು ಪ್ರಜಾಪ್ರಭುತ್ವ ಕಾಣುತ್ತಿದ್ದೇವೆ.

ರಾಮಚಂದ್ರ ಗುಹಾರ ಅಭಿಪ್ರಾಯದಂತೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ 8 ಆಪತ್ತುಗಳೆಂದರೆ,

  1. ಹಳೆಯ ಕಾನೂನುಗಳು – ಅಭಿವ್ಯಕ್ತಿ ಸ್ವತಂತ್ರಕ್ಕೆ ಸಂಬಂಧಪಟ್ಟ ಕಾನೂನುಗಳು 1835 ರಲ್ಲಿ ವಸಾಹತು ಆಳ್ವಿಕೆಯ ಕಾಲದಲ್ಲಿ ರೂಪುಗೊಂಡಂತವು. ಅಂದಿನಿಂದ ಕೆಲವು ತಿದ್ದುಪಡಿಗಳಷ್ಟೇ ಆಗಿರುವುದರಿಂದ ಕಾನೂನುಗಳು ಅಷ್ಟು ಸಮರ್ಥವಾಗಿಲ್ಲ.
  2. ನ್ಯಾಯಾಂಗ ವ್ಯವಸ್ಥೆಯಲ್ಲಿನ ದೋಷ – ಸಿನೆಮ ಮತ್ತ ಪುಸ್ತಕಗಳಿಗೆ ತಡೆಯಾಜ್ಞೆ ತಂದಾಗ ಅದರ ಮೇಲಿರುವ ದುಡ್ಡಿನ ಒತ್ತಡಕ್ಕೋ, ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿಳಂಬದಿಂದಲೋ ಹೆದರಿ ರಾಜಿಯಾಗಬೇಕಾದ ಪರಿಸ್ಥಿತಿ ಇರುತ್ತದೆ.
  3. ಗುರುತಿನ ರಾಜಕೀಯ – ಸುಭಾಷ್ ಚಂದ್ರ ಬೋಸ್ ಬಗ್ಗೆ ಬರೆದರೆ ಬಂಗಾಳಿಗಳು, ಶಿವಾಜಿ ಬಗ್ಗೆ ಬರೆದರೆ ಮರಾಠಿಯವರು, ಪೆರಿಯಾರ್ ಗೆ ತಮಿಳರು, ಅಂಬೇಡ್ಕರ್ ಗೆ ದಲಿತರು ಹೀಗೆ ದೊಡ್ಡ ವ್ಯಕ್ತಿಗಳ ಬಗ್ಗೆ ಅವರ ಸೋಲು, ತಪ್ಪುಗಳ ಕುರಿತು ಬರೆದಾಗ ಅದರ ವಿರುದ್ಧ ನಿಲ್ಲುತ್ತಾರೆ. ಗಂಧಿಯೋಬ್ಬರ ಬಗ್ಗೆ ಈ ದೇಶದಲ್ಲಿ ಯಾರು ಏನನ್ನಾದರೂ ಬರೆಯಬಹುದು.
  4. ಪೊಲೀಸರ ನಡವಳಿಕೆ – ಶಿವಾಜಿಯ ಬಗ್ಗೆ ವಿವಾದಾತ್ಮಕವಾಗಿ ಬರೆದ ಪುಸ್ತಕಕ್ಕೆ ಕೆಲವರು ಕೇಸ್ ಹಾಕಿದಾಗ ನಿಷೇಧಕ್ಕೆ ಒಳಗಾಗಿ ನಂತರ ನಿಷೇಧ ತೆರವುಗೊಳಿಸಿದರು. ಆದರೆ ಆ ಗುಂಪಿನಿಂದ ಲೇಖಕರಿಗೆ ಅಪಾಯವಿದ್ದರೂ ಪೊಲೀಸಿನವರು ಯಾವುದೇ ರಕ್ಷಣೆ ನೀಡಲಿಲ್ಲ.
  5. ಯಾವುದೇ ದೊಡ್ಡ ಅಥವಾ ಚಿಕ್ಕ ರಾಜಕಾರಣಿಗಳೂ ಭಾರತೀಯ ಬರಹಗಾರರು/ಕಲಾವಿದರ ಸ್ವಾತಂತ್ರದ ಹಕ್ಕಿಗೆ ನಿಂತಿಲ್ಲ. ಸಲ್ಮಾನ್ ರಶ್ದಿಯವರ ಮೇಲೆ ಫತ್ವಾ ಹೊರಡುವ ಮುನ್ನವೇ ಅವರ ಸಟಾನಿಕ್ ವರ್ಸೆಸ್ ನಿಷೇದಕ್ಕೆ ಒಳಗಾಯಿತು.
  6. ಸರ್ಕಾರಿ  ಜಾಹಿರಾತಿನ ಮೇಲೆ ಮಾಧ್ಯಮದ ಅವಲಂಬನೆ ಶುರುವಾದಾಗ ನೇರ, ನಿರ್ಭೀತ ಪತ್ರಿಕೋದ್ಯಮ ಅಸಾಧ್ಯ
  7. ವಾಣಿಜ್ಯ ಜಾಹಿರಾತಿನ ಮೇಲೆ ಮಾಧ್ಯಮಗಳ ಅವಲಂಬನೆಯಿಂದಾಗಿ ಕೂಡ  ನ್ಯಾಯ, ನಿಷ್ಟುರವಾದ ಪತ್ರಿಕೋದ್ಯಮ ಅಸಾಧ್ಯ
  8. ಬರಹಗಾರರು ಎಲ್ಲಾ ರಾಜಕೀಯ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳಬೇಕು.

ಈ ವಿಷಯಗಳು ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡುತ್ತವೆ. ಚೀನಾ, ರಷ್ಯ ದೇಶಗಳಿಗಿಂತ ನಾವು ಉತ್ತಮ ವ್ಯವಸ್ಥೆಯಲ್ಲಿದ್ದರೂ, ಸ್ವೀಡನ್ ದೇಶದಂತಹ ವ್ಯವಸ್ಥೆಯೊಂದಬೇಕು